ಶುಚಿಯಾಗಿರಬೇಕೊ

ಅಣ್ಣ ಶುಚಿಯಾಗಿರಬೇಕೊ
ನೀನು ಲಕಲಕ ಅನಬೇಕೋ ||

ದಿನವೂ ಸ್ನಾನವ ಮಾಡಬೇಕು
ಶುಭ್ರ ಬಟ್ಟೆಯ ಧರಿಸಬೇಕು
ಕೂದಲ ಬಾಚಿ ನೀಟಿರಬೇಕು
ನಡೆವ ಕಾಲಿಗೆ ಚಪ್ಪಲಿ ಬೇಕು ||

ವಾರದಲೊಮ್ಮೆ ಉಗುರ ಕಟಾವು
ಆಗಾಗ ಶುದ್ಧಿ ಕಣ್ಣಿನ ತಾವು
ಬೆರಳ ತಿರುವದಿರು ಮೂಗಿಗೆ
ಬೆಳಗು ರಾತ್ರಿ ಉಜ್ಜಣ್ಣ ಹಲ್ಲಿಗೆ ||

ಹಾದಿ ಬೀದಿಲಿ ಉಗುಳಬ್ಯಾಡ
ನಾಯಿಯಂತೆ ಮೂತ್ರಬ್ಯಾಡ
ಶೌಚಾಲಯವ ಬಳಸು ನಿತ್ಯಾ
ಆಗ ನೋಡು ಬದುಕೆಂಥ ಸ್ವಚ್ಚಾ ||

ಇವೆಲ್ಲ ಮಾಡಲು ಸಬೂಬುಬ್ಯಾಡ
ದುಡ್ಡಿರಬೇಕೆಂಬ ಭ್ರಮೆಯೂಬ್ಯಾಡ
ಬಡವರೆಂದರೆ ಕೊಳಕರಲ್ಲ
ಹಣವಂತರೆಲ್ಲ ಪರಿ ಶುದ್ಧರಲ್ಲ ||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಯಣ
Next post ಗುಡಗುಡಿಯನು ಸೇದಿನೋಡೋ

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

cheap jordans|wholesale air max|wholesale jordans|wholesale jewelry|wholesale jerseys